ಮೂರ್ಖ ನಾನು

ಮೂರ್ಖ ನಾನು ಅಪರಾಧ ಮಾಡಿರುವೆ ಕ್ಷಮಿಸಿಬಿಡು ನನ್ನನು
ನಿನ್ನನು ನಾನು ಕ್ಷಮಿಸುವಂತೆಯೇ
ನನ್ನನು ನೀನು

ಬಸವಳಿದು ಬೆಂಡಾಗಿ ಕುಳಿತೆ ನೀನು
ಬಸವಳಿದು ಬಂಡಾಗಿ ನಿಂತೆ ನಾನು
ಚಳಿ ಮಳೆ ಗಾಳಿಯಲಿ ದಿಕ್ಕೆಟ್ಟೆ ನೀನು
ಚಳಿ ಮಳೆ ಗಾಳಿಯಲಿ ಕಂಗೆಟ್ಟೆ ನಾನು

ಒಂದೆ ಪೃಥವಿಯ ಹಾಸಿಗೆ ಹಾಸಿ
ಒಂದೆ ಬಾನಿನ ಛದ್ದರ ಹೊದ್ದು
ಒಂದೆ ನಿದ್ದೆಗೆ ಬಿದ್ದೆವು ನಾವು
ಒಂದೆ ಕನಸೊಳಗಿದ್ದೆವು ನಾವು

ಆಮೇಲೆ ಏನಾಯ್ತೊ ಆಮೇಲೆ ಯಾತಕ್ಕೊ
ಒಬ್ಬರೊಬ್ಬರ ಮೇಲೆ ಹಾಯ್ದು ಹೋದವೊ
ಕುತ್ತಿಗೆ ಹಿಸುಕಿದೆವೊ ಕೈ ಕಾಲು ಮುರಿದೆವೊ
ಭಾರಿ ಪ್ರಪಾತಕ್ಕೆ ತಳ್ಳಿಬಿಟ್ಟೆವೊ

ಬೇರೊಂದು ದಾರಿಯ ಯೋಚಿಸಲೆ ಇಲ್ಲ
ಕೈಯಲಿ ಕೈಯ ಹಿಡಿಯಲೆ ಇಲ್ಲ
ಉಭಯ ಕುಶಲೋಪರಿ ವಿಚಾರಿಸಲಿಲ್ಲ
ನಗುವಂತು ನಾವು ನಗಲೆ ಇಲ್ಲ

ಇನ್ನೊಂದು ಜನ್ಮ ಬರುವುದಿಲ್ಲ
ಈಯೊಂದು ಜನ್ಮದಲೆ ಆಗಬೇಕೆಲ್ಲ
ಇರುವುದೊಂದೇ ಕ್ಷಣ ಕ್ಷಮೆಯ ಕೇಳಲು
ಇರುವುದೊಂದೇ ಕ್ಷಣ ಸ್ವರ್ಗದ ಬಾಗಿಲನು ತೆರೆಯಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೧೨
Next post ಕನ್ನಡತಾಯ ನೋಟ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys